Tuesday, 9 March 2021

ಇಕೋ ಕ್ಲಬ್ ಅಮರಾವತಿ

 ಇಕೋ ಕ್ಲಬ್  ಕಾರ್ಯಕ್ರಮ
 ಕೆಲವರು ಯಾವುದೇ ಪ್ರಚಾರ ,ಸನ್ಮಾನ ವೇದಿಕೆಯಲ್ಲಿ  ಕಾಣದೇ ಮಹತ್ತರವಾದ ಕಾರ್ಯಗಳನ್ನು ಮಾಡುತ್ತಾ ಸಮಾಜೋಪಿಯಾಗಿರುತ್ತಾರೆ  ಅಂತಹವರ ಕಾರ್ಯ ಗುರುತಿಸಿ ಪ್ರೋತ್ಸಾಹಿಸುವವರು  ವಿರಳ.

ಇಂದು ನಮ್ಮ ಶಾಲೆ ಸ.ಹಿ.ಪ್ರಾ.ಶಾಲೆ ಅಮರಾವತಿಯಲ್ಲಿ  
ರಾಷ್ಟ್ರೀಯ ಹಸಿರು ಪಡೆ NGC  ಇಕೋ ಕ್ಲಬ್  ವತಿಯಿಂದ  ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ 
ಬಾನಾಡಿಗಳ ಜೀವನಾಡಿ , ಬಿಸಿಲು ನಾಡಿನ ಪಕ್ಷಿ ಪ್ರೇಮಿ 
ಶ್ರೀ ಸಲಾವುದ್ದೀನ್ 
ಮತ್ತು 
ಪರಿಸರ ಚಿಂತಕ ,ವ್ಯಂಗ್ಯಚಿತ್ರಕಾರ , ಬರಹಗಾರರಾದ 
ಶ್ರೀ ಈರಣ್ಣ ಬೆಂಗಾಲಿ ರವರು ಆಗಮಿಸಿ ಪ್ರಾತ್ಯಕ್ಷಿಕೆ ಮೂಲಕ ಪರಿಸರ ಜಾಗೃತಿ ,ಪ್ರಾಣಿ -ಪಕ್ಷಿಗಳ ಕಾಳಜಿ ಹೇಗೆ ಮಾಡುವುದು . ಪಕ್ಷಿಗಳ ರಕ್ಷಣಾ ತಂತ್ರ ,
 ಮಾಲಿನ್ಯ ನಿಯಂತ್ರಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಒಂದು ಅದ್ಭುತ ಕಾರ್ಯಕ್ರಮ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪಕ್ಷಿ ಪ್ರೇಮಿ 
ಶ್ರೀ ಸಲಾವುದ್ದೀನ್ 
 
ಪರಿಸರ ಚಿಂತಕ 
ಶ್ರೀ ಈರಣ್ಣ ಬೆಂಗಾಲಿ 

ಶಿಕ್ಷಣ ಪ್ರೇಮಿ, ಕವಿಗಳು 
ಶ್ರೀ ಮಾಂತಪ್ಪ ಅಮರಾವತಿ 

SDMC ಅಧ್ಯಕ್ಷರು , ಮುಖ್ಯ ಗುರುಗಳು, ಸಹೋದ್ಯೋಗಿ ಶಿಕ್ಷಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ಮೌಲ್ಯಯುತ ಕಾರ್ಯಕ್ರಮವಾಗಿದ್ದು
 ಪರಿಸರ ಉಳಿಸಿ, ಪ್ರಾಣಿ ಪಕ್ಷಿಗಳನ್ನು ಉಳಿಸಿಕೊಳ್ಳವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

activity

https://youtube.com/shorts/mo2YwC9pU8A?feature=share